ಬಡವನ ಆಸೆ

ಜೀವ ಚಿಮ್ಮಿರುವ ಹೂವೇ
ಹಾಡು ಹೊಮ್ಮಿರುವ ಹಗಲೇ
ಮಾತಾಡುವಾಸೆ ನನಗೆ ನಿಮ್ಮೊಂದಿಗೆ
ಮಿನುಗು ಹೆಜ್ಜೆಯ ತಾರೆಯೇ
ಚಂದ್ರ ಚುಂಬಿತ ರಾತ್ರಿಯೇ
ಬೆರೆಯುವಾಸೆ ನನಗೆ ನಿಮ್ಮೊಂದಿಗೆ.

ಬಿಸಿಲ ಬಂಧನ ಮುರಿದು
ಹಸಿರ ಹಾದಿಗೆ ಜಿಗಿದು
ನಲಿಯುವಾಸೆ ನನಗೆ ನಿಮ್ಮೊಂದಿಗೆ
ನನ್ನ ಕಷ್ಟದ ಕಥೆಯ
ಅನ್ನ ಸಿಕ್ಕದ ವ್ಯಥೆಯ
ತೋಡಿಕೊಳ್ಳುವ ಆಸೆ ನಿಮ್ಮೊಂದಿಗೆ.

ಸಾವ ಬರೆಯಿಸಿಕೊಂಡು
ಸಾಲ ಕೊಟ್ಟವರನ್ನು
ನೂಕಿ, ನುಡಿಯುವ ಆಸೆ ನಿಮ್ಮೊಂದಿಗೆ
ನಂಜು ನಾಲಗೆ ಬಾಣ
ಕಾಡಿ ಕಾಯುವ ಕಣ್ಣ
ತಪ್ಪಿಸಿ, ನೀವಾಗುವಾಸೆ ನಿಮ್ಮೊಂದಿಗೆ.
*****

One thought on “0

  1. ಪ್ರಸ್ತುತ ಸನ್ನಿವೇಶಕ್ಕೆ ಅರ್ಥಪೂರ್ಣ ಕವನ ಸರ್. ಇಂತಹ ಹತ್ತಾರು ಕವನಗಳು ಹೆಚ್ಚು ಹೆಚ್ಚು ಬಂದರೆ ಓದುವ ಭಾಗ್ಯ ನಮ್ಮದಾಗುತ್ತದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ‘ಆನುದೇವಾ ಹೊರಗಣವನು…’ ಒಂದು ಪ್ರತಿಕ್ರಿಯೆ
Next post ತಂದೆ ಪ್ರೀತಿ?

ಸಣ್ಣ ಕತೆ

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

cheap jordans|wholesale air max|wholesale jordans|wholesale jewelry|wholesale jerseys